ಎತ್ತಿನ ಹಾಡು

ಮಾಗಿಽಯ ಹೊಡಿಯಾಗ
ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ
ನಾ ಹೋಗಿ ಒಂದ
ತೆನಿಧಂಟ ತಿಂದರ
ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ
ಕೈಲಾಸಕ ||೧||

ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ
ನಾ ಹೋಗಿ ಒಂದ
ಹೊಡೆಧಂಟ ತಿಂದರ
ಬಡಬಡಗಿಲೆ ಹೊಡೆದ್ಯೊ | ನಮ ಜೀವ ಹೋದಾವೊ
ಕೈಲಾಸಕ ||೨||

ಹೆತ್ತಿಕಾಳೆ ಕುಡು ಅಂದ್ರಽ
ನಿನ ಮಡದಿ ಅತ್ತ ಮಾರಿ ತಿರುವ್ಯಾಳ
ಹತ್ತಗೊಳಗ ತಿನ್ನಂದ್ರ
ಖಂಡಽಗ ತಿನ್ನುವ
ತುಂಡಿನಽ ತಂದ್ಹೊಡೊ | ಜೀವ ಹೋದಾವೊ
ಕೈಲಾಸಕ ||೩||

ಹಿಂಡಿಽಯ ಕುಡು ಅಂದಽ
ನಿನ ಮಡದಿ ಮೂಗನೆ ಮುರದಾಳ
ಖಂಡಽಗ ತಿನ್ನಂದ್ರ
ಇಖ್ಖಂಡ್ಗ ತಿನ್ನಂಥ
ತುಂಡಿನಽ ತಂದ್ಹೊಡೊ | ನಮ ಜೀವ ಹೋದಾವೊ
ಕೈಲಾಸಕ ||೪||

ಇಕ್ಕಿದರ ಹೆಂಡಿನಾದಿನಽ | ಹಚ್ಚಿದರ ಕುಳ್ಳ ನಾದಿನಽ
ದೇವಽರ ಮುಂದಿಽನ
ಪರಸಾದ ನಾ ಆದ
ಮತ್ತ್ಯಾತಕಾದೇನಽ | ನಮ ಜೀನ ಹೋದಾವ
ಕೈಲಾಸಕ ||೫||

ಸತ್ತರ ತೊಗಲಾದೆನಽ | ಮೆಟ್ಟಿದರ ಕೆರವಾದೆನಽ |
ಹೆಗಲ ಮ್ಯಾಲಾಡಂತ
ಬಾರಕೋಲ ನಾ ಆದ
ಮತ್ತ್ಯಾತಕಾದೇನ | ನಮ ಜೀವ ಹೋದಾವ
ಕೈಲಾಸಕ ||೬||
*****

ಎತ್ತಿನ ಕಡೆಯಿಂದ ಅಡವಿಯಲ್ಲಿ ಬೇಕುಬೇಕಾದಷ್ಟು ಕೆಲಸವನ್ನು ಮಾಡಿಸಿಕೊಂಡು ಅದರ ಸುಖದ ಕಡೆಗೆ ಮಾತ್ರ ಅಲಕ್ಷ್ಯವನ್ನು ಮಾಡಿದರೆ ಅದಕ್ಕೆ ಎಷ್ಟು ದುಃಖವಾಗಬೇಡ! ತಮ್ಮ ಕೆಲಸಗಳನ್ನು ಮಂದಿಯ ಕಡೆಯಿಂದ ಬೇಕಾದ ಹಾಗೆ ಮಾಡಿಸಿಕೊಂಡು, ಅವರ ಅನುವು-ಆಪತ್ತುಗಳ ಕಡೆಗೆ ನೋಡುವ ಪ್ರಸಂಗ ಬಂದಾಗ ಮೋರೆ ತಿರುವುವ ಸ್ವಭಾವವು ಬಹು ಜನರಲ್ಲಿರುತ್ತದೆ. ಅಂಥರಿಗೆ ಚುಚ್ಚುವಂತೆ ಈ ಹಾಡು ಇದೆ. ಇದಲ್ಲದೆ ಒಕ್ಕಲಿಗರ ಮನೆಯಲ್ಲಿ ದನ-ಕರುಗಳ ನೀರು-ಮೇವುಗಳ ಚಿಂತೆಯು ಮನೆಯ ಒಡತಿಗೆ ಇಲ್ಲದೆ ಹೋಗಬಾರದೆಂಬುದಕ್ಕೂ ಈ ಹಾಡು ಉಸಯುಕ್ತವಾಗಿದೆಯೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿಯ ಜಾತಿಗೆ ಸೇರಿದ್ದು.

ಶಬ್ದ ಪ್ರಯೋಗಗಳು:— ಮಾಗಿ=ಮಾಗಿಯ ಕಾಲದ ಎಂದರೆ ಮಾಘ ಮಾಸದ ನೇಗಿಲು ಗೆಲಸ. ಮಾಯದಿಂದ=ಪ್ರೀತಿಯಿಂದ. ಧಂಟಿ=ದಂಟು. ತುಂಡೀನ=ಸೊಕ್ಕಿದವಳನ್ನು. ಹೆಂಡಿ=ಸೆಗಣಿ. ಕುಳ್ಳ=ಬರಣಿ. ಪರಸಾದ=ಧೂಪದ ಬೂದಿ (ಪ್ರಸಾದ). ಬಾರಕೋಲ=ಚಬಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋದ ವರ್‍ಷ ಬಂದ ಹಬ್ಬ
Next post ಇನ್ನು ರೋಬೊಟ್‌ಗಳ ಕೆಲಸ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys